ನವದೆಹಲಿ: ಬಲಿಷ್ಠ ನಾಯಕ ಎಂದೇ ಖ್ಯಾತರಾಗಿರುವ ನರೇಂದ್ರ ಮೋದಿ ಭಾರತದ ಪ್ರಧಾನಿಯಾಗಲು ಇನ್ನು ಕೆಲವೇ ದಿನಗಳು ಇರುತ್ತಿದ್ದಂತೆ ಭೂಗತ ಜಗತ್ತಿನ ಪಾತಕಿ ದಾವೂದ್ ಇಬ್ರಾಹಿಂ ತಮ್ಮ ವಾಸಸ್ಥಾನವನ್ನೇ ಬೇರೆಡೆಗೇ ಶಿಫ್ಟ್ ಮಾಡಿದ್ದಾನೆ.
ಇದುವರೆಗೆ ಪಾಕಿಸ್ಥಾನದಲ್ಲಿ ನೆಲೆವೂರಿದ್ದ ಆತ ಇದೀಗ ಅಫ್ಘಾನ್-ಪಾಕ್ ಗಡಿ ಪ್ರದೇಶಕ್ಕೆ ತನ್ನ ವಾಸಸ್ಥಳವನ್ನು ಶಿಫ್ಟ್ ಮಾಡಿಕೊಂಡಿದ್ದಾನೆ. ಇದೆಲ್ಲಾ ಮೋದಿ ಪ್ರಭಾವ ಎನ್ನಲಾಗಿದೆ.
ಇತ್ತೀಚಿಗೆ ಚಾನಲ್ವೊಂದಕ್ಕೆ ಸಂದರ್ಶನ ನೀಡಿದ್ದ ಮೋದಿ, ಅಮೆರಿಕಾ ಒಸಮಾಬಿನ್ ಲಾದೆನ್ ಮೇಲೆ ದಾಳಿ ನಡೆಸಿದ ರೀತಿಯಲ್ಲೇ ದಾವೂದ್ ಮೇಲೆ ದಾಳಿ ನಡೆಸುವ ಸೂಚನೆಯನ್ನು ನೀಡಿದ್ದರು. ಇದು ಭೂಗತ ಪಾತಕಿಯನ್ನು ವಿಚಲಿತಗೊಳಿಸಿದೆ ಎನ್ನಲಾಗಿದೆ.
ಸದೃಢ ವ್ಯಕ್ತಿತ್ವ, ಹೇಳಿದಂತೆ ನಡೆದುಕೊಳ್ಳುವ ಪರಿಯಿಂದಾಗಿ ಮೋದಿ ದಾವೂದ್ನ ಭೇಟೆಗೆ ಕಾಮಾಂಡೋ ರೀತಿಯ ಕಾರ್ಯ ಶೈಲಿ ಅನುಸರಿಸುವ ಸಾಧ್ಯತೆ ಇದೆ ಎಂಬುದು ಕೆಲ ಪಂಡಿತರ ಲೆಕ್ಕಾಚಾರ. ಹೀಗಾಗೀ ಕೇವಲ ದಾವೂದ್ ಮಾತ್ರವಲ್ಲದೇ, ಮುಂಬಯಿ ನಗರಿಯಲ್ಲಿರುವ ಆತನ ಕೆಲ ಬಂಟರೂ ವಿಮಾನವೇರಿ ವಿದೇಶಕ್ಕೆ ಹೊರಟಿದ್ದಾರೆ ಎನ್ನಲಾಗಿದೆ.
ಈಗಾಗಲೇ ದಾವೂದ್ ಮೋದಿಯನ್ನು ಹತ್ಯೆ ಮಾಡಲು ಸ್ಕೆಚ್ಗಳನ್ನು ಕೂಡ ರೂಪಿಸಿದ್ದಾನೆ ಎಂಬ ಮಾಹಿತಿಗಳೂ ಇವೆ.
1993ರ ಮುಂಬಯಿ ಸ್ಪೋಟದ ಪ್ರಮುಖ ರುವಾರಿಯಾಗಿರುವ ಈತ ಮೋದಿ ಆಡಳಿತಾವಧಿಯಲ್ಲಾದರೂ ಬಂಧಿತನಾಗಲಿ ಎಂಬುದು ಭಾರತೀಯರ ಆಶಯ